ಆರೋಗ್ಯ ಸಲಹೆಗಳು

ಆರೋಗ್ಯ ಸಲಹೆಗಳು - ಆರೋಗ್ಯಕರ ಜೀವನಶೈಲಿಗೆ

ಬಾಳೆ ದಿಂಡನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಪ್ರಯೋಜನಗಳು

ಬಾಳೆ ದಿಂಡನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಗೊತ್ತೇ?

ಬಾಳೆ ದಿಂಡನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಪ್ರಯೋಜನ ಆಗುತ್ತದೆ ಗೊತ್ತೇ. ಬಾಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು ಹಾಗೆಯೇ ಬರಿ ಬಾಳೆಹಣ್ಣು ಅಷ್ಟೆ ಅಲ್ಲ ಬಾಳೆ ಹೂ. ಬಾಳೆ ದಿಂಡು.ಬಾಳೆ ಎಲೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ನಿತ್ಯ ಆಹಾರದಲ್ಲಿ ಬಾಳೆ ದಿಂಡನ್ನು ಬಳಕೆ ಮಾಡಿದರೆ ತುಂಬಾ ಒಳ್ಳೆಯದು ಹಾಗಿದ್ದರೆ ಎನೆಲ್ಲೆ ಪ್ರಯೋಜನ ಆಗುತ್ತದೆ ನೋಡೋಣ ಬನ್ನಿ. ಹಾಗಾಗಿ ನಿತ್ಯ ಒಂದೇ ರೀತಿಯ ತರಕಾರಿಯನ್ನು ಸೇವಿಸುವುದರಿಂದ ಆಹಾರದಲ್ಲಿ ಬದಲಾವಣೆ ಕಾಣಬೇಕು ಜೊತೆಗೆ ರುಚಿ ಕೂಡ ಬದಲಾಗಬೇಕು ಅದಕ್ಕೆ ಇನ್ನೂ ಮುಂದೆ ನಿಮ್ಮ ನಿತ್ಯ ಆಹಾರದಲ್ಲಿ ಬಾಳೆ ದಿಂಡು ಕೂಡ ಬಳಸಿ ಇದರಲ್ಲಿ ಸಾರು. ಪಲ್ಯ. ಗೊಜ್ಜು. ಎಲ್ಲವನ್ನೂ ಕೂಡ ಮಾಡಬಹುದು ಬಾಯಿಗೆ ಹೊಸ ರುಚಿ ಸಿಗುತ್ತದೆ ಹಾಗೆಯೇ ಆರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ನಮ್ಮ ಆರೋಗ್ಯವನ್ನು ನಾವೇ ನೋಡಿಕೊಳ್ಳಬಹುದು ಯಾವುದೇ ಸಮಸ್ಯೆ ಬರದ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಮ್ಮೆ ಪ್ರಯತ್ನಿಸಿ ನಿತ್ಯ ಅಡುಗೆಯಲ್ಲಿ ಬಳಸಿ.

ಟೀ ಕಾಫಿಗೆ ಸಕ್ಕರೆ ಬದಲು ಬೆಲ್ಲ ಬೆರೆಸಿ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು

ಟೀ ಕಾಫಿಗೆ ಸಕ್ಕರೆ ಬದಲು ಬೆಲ್ಲ ಬೆರೆಸಿ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು

ಸಕ್ಕರೆ, ಮೈದಾ, ಬಿಳಿ ಉಪ್ಪು, ಹಾಲು ಮತ್ತು ಪಾಲಿಶ್ ಮಾಡಿದ ಅಕ್ಕಿ, ಇಷ್ಟನ್ನೂ ಇಂದಿನ ವಿಜ್ಞಾನ ಐದು ಬಿಳಿ ವಿಷಗಳು (five white poisons)ಎಂದು ಕರೆದಿದೆ. ಆದರೆ ನಿಯಂತ್ರಣಗಳನ್ನೇನೂ ಹೇರಿಲ್ಲ. ಹೇರದೇ ಇರಲು ಕಾರಣ ಇವುಗಳನ್ನು ಅವಲಂಬಿಸಿರುವ ಉದ್ದಿಮೆಗಳು ಮತ್ತು ಇವುಗಳನ್ನು ಆಧರಿಸಿರುವ ಸರ್ಕಾರಗಳ ಮತ್ತು ದೊಡ್ಡ ಶಕ್ತಿಗಳ ಒತ್ತಡ. ಆದ್ದರಿಂದ ಎಲ್ಲಿಯವರೆಗೆ ಗ್ರಾಹಕರೇ ತಾವಾಗಿ ಇವುಗಳ ಒಲವನ್ನು ತ್ಯಜಿಸುವುದಿಲ್ಲವೋ ಅಲ್ಲಿಯವರೆಗೂ ಇವುಗಳು ಮುಂದುವರೆಯಲಿವೆ. ಇಂದಿನ ಲೇಖನದಲ್ಲಿ ಬಿಳಿ ಸಕ್ಕರೆಯ ಬದಲು ಬೆಲ್ಲವನ್ನು ಟೀ ಕಾಫಿಗಳಲ್ಲಿ ಸೇರಿಸಿಕೊಳ್ಳುವುದರ ಪ್ರಮುಖ ಪ್ರಯೋಜನಗಳನ್ನು ನೋಡೋಣ. ಬಿಳಿ ಸಕ್ಕರೆ ಅಥವಾ ಕಂದು ಬೆಲ್ಲ, ಎರಡೂ ಕಬ್ಬಿನಿಂದಲೇ ಮಾಡಲ್ಪಟ್ಟಿವೆಯಾದರೂ ಎರಡನ್ನೂ ತಯಾರಿಸುವ ವಿಧಾನಗಳಲ್ಲಿ ಭಾರೀ ವ್ಯತ್ಯಾಸವಿರುವ ಕಾರಣ ಕಬ್ಬಿನ ಹಾಲಿನಲ್ಲಿರುವ ಪೋಷಕಾಂಶಗಳು ಮತ್ತು ಇತರ ಗುಣಗಳು ಇಲ್ಲವಾಗುತ್ತವೆ ಹಾಗೂ ಕೇವಲ ಸಿಹಿ ಒಂದೇ ಉಳಿದುಕೊಳ್ಳುವುದರಿಂದಲೇ ನೋಡಲಿಕ್ಕೆ ಸುಂದರವಾದ ಬಿಳಿ ಸಕ್ಕರೆ ಬಿಳಿವಿಷದ ಪಟ್ಟಿಯಲ್ಲಿದೆ. ಅಲ್ಲದೇ ಇದನ್ನು ಬಿಳಿಯಾಗಿಸಲು ಸುಟ್ಟ ಮೂಳೆಗಳನ್ನೂ ಬಳಸುವ ಕಾರಣ ಇದನ್ನು ಸಸ್ಯಾಹಾರಿ ಅಲ್ಲ ಎನ್ನುವವರೂ ಇದ್ದಾರೆ. (bone char ಎಂಬ ಪದವನ್ನು ಗೂಗಲಿಸಿ ನೋಡಿ) ಆದರೆ ಬೆಲ್ಲ ಅಪ್ಪಟ ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸಲ್ಪಟ್ಟ, ಯಾವುದೇ ಕೃತಕ ರಾಸಾಯನಿಕಗಳನ್ನು ಒಳಗೊಂಡಿರದ ಉತ್ಪನ್ನವಾಗಿದೆ. ಬನ್ನಿ, ಇದರ ಪ್ರಯೋಜನಗಳಲ್ಲಿ ಕೆಲವನ್ನು ನೋಡೋಣ: ಬೆಲ್ಲದ ಸೇವನೆಯಿಂದ ಜೀರ್ಣಾಂಗಗಳಲ್ಲಿ ಪ್ರಚೋದನೆ ದೊರಕುತ್ತದೆ ಹಾಗೂ ಕರುಳುಗಳಲ್ಲಿ ಜೀರ್ಣಗೊಂಡ ಅಹಾರದ ಚಲನೆ ಸುಲಭಗೊಳ್ಳುತ್ತದೆ. ಬೆಲ್ಲದ ಟೀ ಸೇವಿಸುವ ಮೂಲಕ ಜೀರ್ಣಾಂಗದ ಕಿಣ್ವಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ ಹಾಗೂ ಜೀರ್ಣವ್ಯವಸ್ಥೆಯನ್ನುಉತ್ತಮಗೊಳಿಸಿ ಮಲಬದ್ದತೆಯಾಗದಂತೆ ತಡೆಯುತ್ತದೆ. ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತದ ಹೀಮೋಗ್ಲೋಬಿನ್ ಉತ್ಪಾದನೆಗೆ ನೆರವಾಗುತ್ತದೆ. ಬೆಲ್ಲವನ್ನು ನಿಮ್ಮ ನಿತ್ಯದ ಟೀ ಕಾಫಿಗಳಲ್ಲಿ ಬೆರೆಸಿಯೂ ಸೇವಿಸಬಹುದು ಅಥವಾ ಸಕ್ಕರೆ ಬಳಸುವ ಇತರ ಆಹಾರಗಳಲ್ಲಿ ಬೆರೆಸಿಯೂ ತಿನ್ನಬಹುದು. ದಿನದ ಕಬ್ಬಿಣದ ಅಗತ್ಯತೆಗೆ ಸುಮಾರು ಒಂದು ದೊಡ್ಡ ಚಮಚದಷ್ಟು ಬೆಲ್ಲ ಸಾಕಾಗುತ್ತದೆ. ಯಕೃತ್ ಮತ್ತು ಮೂತ್ರಪಿಂಡಗಳು ನಮ್ಮ ರಕ್ತವನ್ನು ಶೋಧಿಸಿ ಕಲ್ಮಗಳನ್ನು ನಿವಾರಿಸುವ ಶೋಧಕ ಅಂಗಗಳಾಗಿವೆ. ಇವುಗಳ ಕ್ಷಮತೆಯನ್ನು ಹೆಚ್ಚಿಸಲು ಬೆಲ್ಲ ನೆರವಾಗುತ್ತದೆ. ಹೌದು, ಕೊಂಚ ವಿಚಿತ್ರ ಎನಿಸಿದರೂ ಬೆಲ್ಲದ ಸೇವನೆಯಿಂದ ಯಕೃತ್ ಕಲ್ಮಶಗಳನ್ನು ನಿವಾರಿಸುವ ಕ್ಷಮತೆಯನ್ನು ಹೆಚ್ಚಿಸಿ ಕೊಳ್ಳುವುದನ್ನು ಗಮನಿಸಲಾಗಿದೆ. ಸಾಮಾನ್ಯ ಶೀತ, ಹೊಟ್ಟೆಯುಬ್ಬರಿಕೆ, ಚರ್ಮ ಒಣಗುವುದು ಮೊದಲಾದ ತೊಂದರೆಗಳು ಎದುರಾದಾಗ ಬೆಲ್ಲದ ತುಂಡೊಂದನ್ನು ತಿಂದು ಉಗುರುಬೆಚ್ಚಗಿನ ನೀರು ಕುಡಿದರೆ ಇದೇ ಪ್ರಥಮ ಚಿಕಿತ್ಸೆಯಾಗಿ ಸಾಕಾಗುತ್ತದೆ. ಬದಲಿಗೆ ನಿಮ್ಮ ಟೀಯಲ್ಲಿ ಒಂದು ತುಂಡು ಬೆಲ್ಲವನ್ನು ಬೆರೆಸಿಯೂ ಸೇವಿಸಬಹುದು. ಮಹಿಳೆಯರಿಗೆ ಮಾಸಿಕ ದಿನಗಳ ಬಳಿಕ ಮುನ್ನ ಎದುರಾಗುವ ಮಾನಸಿಕ ತೊಳಲಾಟಗಳು (PMS premenstrual syndrome) ಮನೋಭಾವದ ಏರುಪೇರಿಗೆ ಕಾರಣವಾಗುತ್ತವೆ. ಈ ದಿನಗಳು ಆಗಮಿಸುವ ಮುನ್ನಾ ದಿನಗಳಿಂದಲೇ ದಿನಕ್ಕೊಂದು ತುಂಡು ಬೆಲ್ಲವನ್ನು ಸೇವಿಸುತ್ತಾ ಬಂದರೆ ಈ ತೊಂದರೆಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆಯಾಗುತ್ತವೆ. ಬೆಲ್ಲವನ್ನು ಸೇವಿಸಿದಾಗ ಇವು ದೇಹದಲ್ಲಿ ಎಂಡಾರ್ಫಿನ್ ಗಳು ಎಂಬ ರಸದೂತವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ ಹಾಗೂ ಮಾಸಿಕ ದಿನಗಳು ಎದುರಾಗುವ ಮುನ್ನ ರಸದೂತಗಳ ಪ್ರಭಾವದಿಂದ ಎದುರಾಗುವ ಮಾನಸಿಕ ತೊಳಲಾಟವನ್ನು ಆದಷ್ಟೂ ಕಡಿಮೆಗೊಳಿಸುತ್ತವೆ. ಬಿಸಿಲಿನ ಧಗೆಯಲ್ಲಿ ನಡೆದು ಬಂದ ಬಳಿಕ ದಣಿವಾರಿಸಿಕೊಳ್ಳಲು ಒಂದು ತುಂಡು ಬೆಲ್ಲ ಮತ್ತು ತಣ್ಣೀರನ್ನು ಸೇವಿಸಿದರೆ ಬಿಸಿಲಿನ ಹೊಡೆತದಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಬೆಲ್ಲದ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಎಲೆಕ್ಟ್ರೋಲೈಟುಗಳನ್ನು ಪಡೆಯಲು ಸಾಧ್ಯವಾಗುವುದೇ ಇದಕ್ಕೆ ಕಾರಣ. ಹಿಂದಿನ ದಿನಗಳಲ್ಲಿ ದಾರಿಯಲ್ಲಿ ನಡೆದು ಹೋಗುವವರಿಗಾಗಿ ಪ್ರತಿ ಮನೆಯ ಮುಂಭಾಗದಲ್ಲಿಯೂ ತಣ್ಣೀರಿನ ಮಡಕೆ ಮತ್ತು ಕೊಂಚ ಬೆಲ್ಲದ ತುಂಡುಗಳನ್ನು ಇರಿಸಲಾಗುತ್ತಿತ್ತು. ಇವನ್ನು ಸೇವಿಸಿದ ಜನರು ದಿನವಿಡೀ ನಡೆಯುತ್ತಾ ಹಲವಾರು ಮೈಲುಗಳನ್ನು ನಡೆದೇ ಕ್ರಮಿಸುತ್ತಿದ್ದರು. ಮೊದಲೇ ತಿಳಿಸಿದಂತೆ ಬೆಲ್ಲ ನೋಡಲಿಕ್ಕ ಅನಾಕರ್ಷಕ ಸಾಮಾಗ್ರಿಯಾಗಿದೆ. ಅಂದರೆ ಇದನ್ನು ನೋಡಲಿಕ್ಕೆ ಸುಂದರವಾಗಿಸಲು ಕೆಲವು ಉದ್ದಿಮೆಗಳು ಸುಣ್ಣ ಅಥವಾ ಬೇರಾವುದೋ ರಾಸಾಯನಿಕ ಗಳನ್ನು ಬೆರೆಸಬಹುದು. ಹಾಗಾಗಿ ನೋಡಲಿಕ್ಕೆ ಸುಂದರವಾಗಿ ಕಂಡಷ್ಟೂ ಬೆಲ್ಲ ಅನಾರೋಗ್ಯಕರ ಎಂದು ಅರ್ಥೈಸಿಕೊಳ್ಳಬೇಕು. ಉತ್ತಮ ಬೆಲ್ಲದ ಗುಣ ಎಂದರೆ ಇದು ಆದಷ್ಟೂ ಗಾಢ ಕಂದು ಬಣ್ಣದಲ್ಲಿರಬೇಕು (ಹಳದಿ ಇದ್ದಷ್ಟೂ ಒಳ್ಳೆಯದಲ್ಲ). ಅಲ್ಲದೇ ಸುಲಭವಾಗಿ ಬೆರಳುಗಳಿಂದ ಮುರಿಯಲು ಸಾಧ್ಯ ವಾಗುವಂತಿರಬೇಕು. ಎರಡು ಬೆರಳುಗಳ ನಡುವೆ ಹಿಚುಕಿದಾಗ ದಪ್ಪ ಕಣಗಳು ಉಳಿಯಬಾರದು. ಇತ್ತೀಚಿನ ದಿನಗಳಲ್ಲಿ ಬೆಲ್ಲದ ಪುಡಿ ಎಂಬ ಹೆಸರಿನಲ್ಲಿ ಸಕ್ಕರೆಗೇ ಬೆಲ್ಲವನ್ನು ಚೆನ್ನಾಗಿ ಬೆರೆಸಿ ಬೆಲ್ಲದ ರೂಪ ನೀಡಿ ದುಪ್ಪಟ್ಟು ಬೆಲೆಯಲ್ಲಿ ಮಾರುವುದು ಕಂಡುಬರುತ್ತಿದೆ. ಹಾಗಾಗಿ ಇದರಲ್ಲಿ ಸಕ್ಕರೆ ಬೆರೆತಿಲ್ಲವಷ್ಟೇ ಎಂದು ಖಚಿತಪಡಿಸಿಕೊಳ್ಳಬೇಕು. ರುಚಿಯೂ ಅಷ್ಟೇ, ನಾಲಿಗೆಗೆ ತಗುಲಿದ ತಕ್ಷಣವೇ ಇದು ಸಕ್ಕರೆಯಷ್ಟು ಸಿಹಿ ಇರಬಾರದು, ಬದಲಿಗೆ ಕೊಂಚವೇ ಹುಳಿಮಿಶ್ರಿತ ಸಿಹಿ ಇರಬೇಕು. ಈ ಗುಣಗಳಿರುವ ಬೆಲ್ಲ ಕೊಂಚ ದುಬಾರಿಯೇ ಇರಬಹುದು. … Read more

ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

ಮೊದಲೆಲ್ಲಾ ಕೆಮ್ಮು, ಶೀತ ಬಂದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ. ಈರುಳ್ಳಿ ಸಿರಪ್ ಮಾಡುವ ವಿಧಾನ ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿಯಲ್ಲಿರುವ ಖಾರ ಹಾಗೂ ಘಾಟು ಅದರಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ. ಇದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದ್ದು, ಈರುಳ್ಳಿ ಸೇವನೆಯಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಈರುಳ್ಳಿಯಲ್ಲಿ ಏಲ್ಲಿನ್ ಎಂಬ ಅಂಶವಿದೆ. ಈ ಅಂಶ ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ. ಜೇನು ತುಪ್ಪದಲ್ಲಿರುವ ಆರೋಗ್ಯಕರ ಲಾಭವೇನು?ಜೇನು ತುಪ್ಪದಲ್ಲಿ ವಿಟಮಿನ್ ಬಿ, ಆ್ಯಂಟಿಬಾಡಿ, ಖನಿಜಾಂಶಗಳು, ಪ್ರೀಬಯೋಟಿಕ್ ಅಂಶ ಅಡಕವಾಗಿದೆ. ಜೇನು ತುಪ್ಪ ಸೇವನೆ ಮಾಡಿದರೆ ಅದು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆ ಮಾಡುತ್ತದೆ. ಜೇನು ತುಪ್ಪದಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ವೃದ್ಧಿಸುತ್ತದೆ. ಈ ಈರುಳ್ಳಿ ಸಿರಪ್ ಅನ್ನು ಒಂದು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಕೊಡಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ದೊಡ್ಡವರು ಈ ಸಿರಪ್ ಸೇವಿಸಬಹುದು.

ದೊಡ್ಡಪತ್ರೆಯಲ್ಲಿರುವ ಈ ಔಷಧೀಯ ಗುಣಗಳ ಬಗ್ಗೆ ತಿಳಿದಿರಲಿ

ದೊಡ್ಡಪತ್ರೆಯಲ್ಲಿರುವ ಈ ಔಷಧೀಯ ಗುಣಗಳ ಬಗ್ಗೆ ತಿಳಿದಿರಲಿ

“ದೊಡ್ಡಪತ್ರೆ” ಅಥವಾ “ಸಾಂಬ್ರಾಣಿ ಸೊಪ್ಪು” ಅಥವಾ “ಸಾಂಬಾರ್ ಬಳ್ಳಿ” ಹೀಗೆ ನಾನಾ ಹೆಸರುಗಳಿಂದ ಕರೆಯುತ್ತೇವೆ. ಬಹಳ ಔಷಧ ಗುಣವನ್ನು ಹೊಂದಿರುವ ಸಸಿಯಿದು. ಮನೆಯ ಹಿತ್ತಲಲ್ಲಿ ಸಿಗುವಂತೆ ಬೆಳೆಸಬಹುದು. ಇದರಿಂದ ತಯಾರಿಸಬಹುದಾದ ಹಲವು ರೀತಿಯ ಅಡುಗೆಯನ್ನು ಮಾಡಬಹುದು. ದೊಡ್ಡಪತ್ರೆ ಎಲೆಗಳು ಮೃದುವಾಗಿದ್ದು, ದಪ್ಪನಾಗಿದ್ದು, ಓರೆಗಾನೊ ರೀತಿಯ ಸವಾಸನೆಯನ್ನು ಹೊಂದಿದೆ. ಈ ಸಸ್ಯ ಬಹಳ ಬೇಗ ಬೆಳೆಯುತ್ತದೆ ಮತ್ತು ಇದಕ್ಕೆ ಸ್ವಲ್ಪ ನೀರು ಸಾಕಾಗುತ್ತದೆ. ಯಾವುದೇ ರೀತಿಯ ಹವಾಮಾನದಲ್ಲಿ ಸಹ ಇದು ಬೆಳೆಯಬಲ್ಲದು. ನನ್ನ ಮನೆಯ ತೋಟದಲ್ಲಿ ದೊಡ್ಡಪತ್ರೆಯ ಸಸ್ಯವಿದ್ದು, ಅದರ ಚಿತ್ರ ಮತ್ತು ಅದರ ಎಲೆಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾದ ಅಡುಗೆಗಳ ಚಿತ್ರವನ್ನು ಇಲ್ಲಿ ನೀವು ಕಾಣಬಹುದು ಸಾಮಾನ್ಯವಾಗಿ ಎಲ್ಲರ ಮನೆಯ ಕುಂಡಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯ ದೊಡ್ಡಪತ್ರೆ. ಕೆಮ್ಮು, ನೆಗಡಿ, ಗಂಟಲ ಸಮಸ್ಯೆಗಳಿಗೆ ಈ ಗಿಡದ ಎಲೆಗಳು ತುಂಬಾ ಉಪಕಾರಿ. ಹಾಗಾಗಿ ಇದನ್ನು ಮನೆಯಲ್ಲೇ ಬೆಳೆಯಲಾಗುತ್ತದೆ. ಯಾಕೆಂದರೆ ಅನಾರೋಗ್ಯ ಸಮಸ್ಯೆಗಳು ಎದುರಾದಾಗ ಸುಲಭವಾಗಿ ಕೈಗೆಟುಕುತ್ತದೆ. ದೊಡ್ಡಪತ್ರೆಯಿಂದ ಏನೆಲ್ಲಾ ಲಾಭಗಳಿವೆ ಎಂಬುದನ್ನು ಈಗ ನೋಡೋಣ. * ದೊಡ್ಡ ಪತ್ರೆ ಸೊಪ್ಪನ್ನು ಹುರಿದು ರಸತೆಗೆದು ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಗಂಟಲು ನೋವು ಕಡಿಮೆಯಾಗುತ್ತದೆ. * ದೊಡ್ಡ ಪತ್ರೆ ಮತ್ತು ಓಂಕಾಳನ್ನು ನೀರಲ್ಲಿ ಕುದಿಸಿ ಆ ನೀರನ್ನು ಪದೇ ಪದೇ ಸೇವಿಸಿದರೆ ಅಜೀರ್ಣದಿಂದ ಕೆಮ್ಮು ಇದ್ದರೆ ಕಡಿಮೆಯಾಗುತ್ತದೆ. * ಚರ್ಮದಲ್ಲಿ ಗಂದೆಗಳು, ತುರಿಕೆ ಇದ್ದರೆ ದೊಡ್ಡ ಪತ್ರೆ ಸೊಪ್ಪನ್ನು ಹುರಿದು ರಸ ತೆಗೆದು ಚರ್ಮಕ್ಕೆ ಲೇಪ ಮಾಡಿದರೆ ತಕ್ಷ ಣ ತುರಿಕೆ ಮತ್ತು ಗಂದೆಗಳು ನಿವಾರಣೆಯಾಗುತ್ತವೆ. * ಕಫ ಹೆಚ್ಚಾಗಿ ತಲೆನೋವು ಇದ್ದರೆ ದೊಡ್ಡ ಪತ್ರೆ ಪೇಸ್ಟ್‌ ಮಾಡಿ ಹಣೆಗೆ ಲೇಪ ಮಾಡಿದರೆ ತಲೆನೋವು ಶಮನವಾಗುತ್ತದೆ. * ದೊಡ್ಡ ಪತ್ರೆ ಮತ್ತು ನೀರು ಸೇರಿಸಿ ತಯಾರಿಸಿದ ಕಷಾಯವನ್ನು ಸೇವಿಸಿದರೆ ಮನಸ್ಸು ಶಾಂತವಾಗಿ ಮನಸ್ಸಿನ ಆರೋಗ್ಯ ಹೆಚ್ಚುತ್ತದೆ. * ಸಂಧಿಗಳಲ್ಲಿ ನೋವಿದ್ದರೆ ದೊಡ್ಡ ಪತ್ರೆ ಸೊಪ್ಪನ್ನು ಪೇಸ್ಟ್‌ ಮಾಡಿ ನೋವಿದ್ದಲ್ಲಿ ಲೇಪ ಮಾಡಿದರೆ ನೋವು ಬೇಗ ನಿವಾರಣೆಯಾಗುತ್ತದೆ. * ದೊಡ್ಡ ಪತ್ರೆ ರಸಕ್ಕೆ ಹಸಿ ಶುಂಠಿ ರಸ ಸೇರಿಸಿ ಸೇವಿಸಿದರೆ ಹಸಿವು ಹೆಚ್ಚುತ್ತದೆ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ. * ಕಣ್ಣು ಸುತ್ತಲೂ ಊತ ಇದ್ದರೆ ದೊಡ್ಡ ಪತ್ರೆ ರಸವನ್ನು ಕಣ್ಣು ಸುತ್ತಲೂ ಹಚ್ಚಿದರೆ ಊತ ಕಡಿಮೆಯಾಗುತ್ತದೆ. * ಮಕ್ಕಳಲ್ಲಿ ಕಫ ಹೆಚ್ಚಾಗಿ ಆಸ್ತಮಾ ಇದ್ದರೆ ದೊಡ್ಡ ಪತ್ರೆ ರಸವನ್ನು ಎದೆ ಮೇಲೆ ಹಚ್ಚಿದರೆ ಕಫ ಕರಗಿ ಆಸ್ತಮಾ ಕಡಿಮೆಯಾಗುತ್ತದೆ.

ಮೊಸರಿನಲ್ಲಿ ಸ್ವಲ್ಪ ಜೀರಿಗೆ ಬೆರಸಿ ತಿನ್ನುವುದರಿಂದ ಆಗುವ ಉಪಯೋಗ

ಮೊಸರಿನಲ್ಲಿ ಸ್ವಲ್ಪ ಜೀರಿಗೆ ಬೆರಸಿ ತಿನ್ನುವುದರಿಂದ ಆಗುವ ಉಪಯೋಗ

ಸಾಮಾನ್ಯವಾಗಿ ಮೊಸರು ಸೇವನೆ ಅಭ್ಯಾಸ ಕೆಲವರಲ್ಲಿ ಇದ್ದೆ ಇರುತ್ತದೆ ಆದ್ರೆ, ಬಹಳಷ್ಟು ಜನ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿದುಕೊಂಡಿರೋದಿಲ್ಲ. ಈ ಮೂಲಕ ಮೊಸರು ಹೇಗೆ ಉಪಯೋಗಕಾರಿ ಅನ್ನೋದನ್ನ ನೋಡಿ. ಮೊದಲನೆಯದಾಗಿ ಮಲಬದ್ಧತೆ ಹಾಗೂ ಅಜೀರ್ಣತೆ ನಿವಾರಿಸಲು ಮೊಸರು ಸಹಕಾರಿ ಹೇಗೆ ಬಳಸಬೇಕು ಅನ್ನೋದಾದರೆ, ಒಂದು ಕಪ್ಪು ಮೊಸರು ಜೊತೆ ಸ್ವಲ್ಪ ಕಪ್ಪು ಮೆಣಸಿನ ಪುಡಿ ಅನ್ನು ಬೆರೆಸಿ ತಿನ್ನಬೇಕು. ಹೀಗೆ ತಿನ್ನುವುದರಿಂದ ದೇಹದಲ್ಲಿ ಅಜೀರ್ಣತೆ ಸಮಸ್ಯೆ ಕಾಡೋದಿಲ್ಲ. ಇನ್ನು ಮೊಸರನ್ನು ಈ ರೀತಿಯಾಗಿ ತಿಂದಿದ್ದೆಯಾದಲ್ಲಿ ದೇಹಕ್ಕೆ ಎನರ್ಜಿಯನ್ನು ಪಡೆಯುವುದರ ಜೊತೆಗೆ ಮಾಂಸ ಖಂಡಗಳ ಶಕ್ತಿಗೆ ಮೊಸರು ಪೂರಕವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರಸಿ ತಿನ್ನುವುದರಿಂದ ದೇಹದಕ್ಕೆ ಸ್ನಾಯುಗಳಿಗೆ ಶಕ್ತಿ ವೃದ್ಧಿಯಾಗುವುದು. ಹಣ್ಣಗಳು ದೇಹದ ಅರೋಗ್ಯ ವೃದ್ಧಿಸುತ್ತವೆ ಹಾಗಾಗಿ ಶುದ್ಧವಾದ ಹಣ್ಣಗಳನ್ನು ಕಟ್ ಮಾಡಿಕೊಂಡು ಮೊಸರಿನಲ್ಲಿ ಹಾಕಿಕೊಂಡು ತಿನ್ನುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಯಾವುದೇ ರೀತಿಯ ರೋಗಗಳು ಬೇಗನೆ ಅಂಟೋದಿಲ್ಲ. ಇನ್ನು ಮೊಸರಿನಲ್ಲಿ ಸ್ವಲ್ಪ ಮಟ್ಟಿಗೆ ಅರಿಶಿನ ಪುಡಿಯನ್ನು ಹಾಕಿಕೊಂಡು ಅದಕ್ಕೆ ಇನ್ನು ಸ್ವಲ್ಪ ಶುಂಠಿ ಬೆರಸಿ ಸೇವನೆ ಮಾಡುವುದರಿಂದ ದೇಹಕ್ಕೆ ಪೊಲಿಡ್ ಅಸಿಡಿ ಅಂಶ ದೊರೆಯುತ್ತದೆ ಇದರಿಂದ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಉತ್ತಮವದ ಅರೋಗ್ಯ ವೃದ್ಧಿಯಾಗುವುದು. ವಿಟಮಿನ್ ಸಿ ಅಂಶವನ್ನು ಹೊಂದಿರುವಂತ ಅರೇಂಜ್, ಇದರ ಜ್ಯುಸ್ ಅನ್ನು ಮೊಸರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದರಿಂದ ದೇಹಕ್ಕೆ ವಿಟಮಿನ್ ಅಂಶಗಳು ಹೇರಳವಾಗಿ ವೃದ್ಧಿಯಾಗುತ್ತದೆ ಅಲ್ಲದೆ ವೃದ್ಯಾಪ್ಯ ಸಮಸ್ಯೆ ದೂರವಾಗುತ್ತದೆ. ಇನ್ನು ಸ್ವಲ್ಪ ಜೀರಿಗೆ ಪುಡಿಯನ್ನು ಮೊಸರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದರಿಂದ ಬೇಗನೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು ಎಂಬುದಾಗಿ ಹೇಳಲಾಗುತ್ತದೆ. ಇನ್ನು ಅಜೀರ್ಣತೆಗೆ ಸಂಬಂಧಿಸಿದ ಸಮಸ್ಯೆ ನಿಯಂತ್ರಣಕ್ಕೆ ಸ್ವಲ್ಪ ಕಪ್ಪು ಉಪ್ಪನ್ನು ಅರೆದುಕೊಂಡು ಅದು ನುಣ್ಣಗೆ ಆದ ನಂತರ ಒಂದು ಕಪ್ ಮೊಸರಿನಲ್ಲಿ ಬೆರಸಿಕೊಂಡು ಕುಡಿಯಬೇಕು ಇದರಿಂದ ಜೀರ್ಣ ಸಂಬಂದಿ ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗ್ಯಾಸ್ಟ್ರಿಕ್ ಅಸಿಡಿಟಿ ನಿವಾರಣೆಯಾಗುವುದು. ಹೀಗೆ ಹತ್ತಾರು ಲಾಭಗಳನ್ನು ಮೊಸರಿನಿಂದ ಪಡೆಯಬಹುದಾಗಿದೆ.

ಕೊಲೆಸ್ಟ್ರಾಲ್ ಅನ್ನು ಬೇಗನೆ ಕಮ್ಮಿ ಮಾಡುವ ಆಹಾರಗಳು

ಕೊಲೆಸ್ಟ್ರಾಲ್ ಅನ್ನು ಬೇಗನೆ ಕಮ್ಮಿ ಮಾಡುವ ಆಹಾರಗಳು

ವಯಸ್ಸು 40 ದಾಟಿದರೆ ಸಾಕು, ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿನವರನ್ನು ಕಾಡಲಾರಂಭಿಸುತ್ತದೆ. ಕೊಲೆಸ್ಟ್ರಾಲ್ ಅಪಾಯಕಾರಿಯಾದ ಕಾಯಿಲೆ ಅಲ್ಲದಿದ್ದರೆ, ಅದನ್ನು ಕಮ್ಮಿ ಮಾಡದೆ ಹಾಗೇ ಬೆಳೆಯಲು ಬಿಟ್ಟರೆ ಮಾತ್ರಪ್ರಾಣಕ್ಕೆ ಸಂಚಕಾರ ತರುವುದು. ಕೊಲೆಸ್ಟ್ರಾಲ್ ಬರದಿರುವಂತೆ ಎಚ್ಚರವಹಿಸಬೇಕು, ಈಗಾಗಲೇ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಆಹಾರಕ್ರಮದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಆಹಾರಗಳಿವೆ,ಅವುಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ಇರುವವರು ಔಷಧಿಯನ್ನು ತೆಗೆದುಕೊಳ್ಳುವುದರ ಜೊತೆಗೆ ಈ ಕೆಳಗಿನ ಆಹಾರಗಳನ್ನು ತಿನ್ನುವುದರಿಂದಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಬಾರ್ಲಿ ಬಾರ್ಲಿಯಲ್ಲಿ ನಾರಿನಂಶ ಅತ್ಯಧಿಕವಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬದನೆಕಾಯಿಕೊಲೆಸ್ಟ್ರಾಲ್ ಇರುವವರು ತಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಬದನೆಕಾಯಿಯ ಸಾರು ತಿನ್ನುವುದು ಒಳ್ಳೆಯದು( ಪಲ್ಯ ತಿನ್ನಬೇಡಿ).  ಮೀನುಮೀನಿನಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು, ಇದನ್ನು ತಿಂದಾಗ ದೇಹದಲ್ಲಿ ಒಳ್ಳೆಯ ಕೊಬ್ಬಿನಂಶ ಹೆಚ್ಚಾಗಿ ಕೆಟ್ಟ ಕೊಬ್ಬಿನಂಶ ಕಡಿಮೆಯಾಗುವುದು.  ಸೇಬು ಸೇಬಿನಲ್ಲಿ ಪೆಕ್ಟಿನ್ ಎಂಬ ಅಂಶವಿದ್ದು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.  ನಟ್ಸ್ಆರೋಗ್ಯಕರ ಸ್ನ್ಯಾಕ್ಸ್ ತಿನ್ನಬೇಕು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಮುಟ್ಟಲೇಬಾರದು. ನಟ್ಸ್, ಬಾದಾಮಿ ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚಿಸಬಹುದು.  ಟೀಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಹಾಲು ಹಾಕಿದ ಟೀ ಬದಲು ಬ್ಲ್ಯಾಕ್ ಟೀ ಕುಡಿಯವುದು ಒಳ್ಳೆಯದು. ಈರುಳ್ಳಿಈರುಳ್ಳಿಯನ್ನು ಹೆಚ್ಚಾಗಿಯೇ ತಿನ್ನಿ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.  ಓಟ್ಸ್ಓಟ್ಸ್ ಕೇವಲ ಸ್ಲಿಮ್ ಫಿಗರ್ ನೀಡುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ರಾಗಿ ತುಂಬಾ ಒಳ್ಳೆಯದುಕೊಲೆಸ್ಟ್ರಾಲ್ ಕಡಿಮೆ ಮಾಡಲು ರಾಗಿಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ತುಂಬಿ, ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.  ಸಿಟ್ರಸ್ ಹಣ್ಣುಗಳುಸಿಟ್ರಸ್ ಇರುವ ಹಣ್ಣುಗಳು ಒಟ್ಟು ಮೊತ್ತ ಆರೋಗ್ಯದ ರಕ್ಷಣೆಗೆ ಅವಶ್ಯಕ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿ.  ಸೊಪ್ಪುಸೊಪ್ಪನ್ನು ಹೆಚ್ಚಾಗಿ ತಿನ್ನಿ. ಸೊಪ್ಪು ದೇಹದಲ್ಲಿ ಕಬ್ಬಿಣದಂಶ ಹೆಚ್ಚು ರಕ್ತ ಕಣಗಳ ಉತ್ಪತ್ತಿಯನ್ನು ಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಅನ್ನೂ ಕಡಿಮೆ ಮಾಡುತ್ತದೆ.  ಸೋಯಾ ಪದಾರ್ಥಹಾಲಿನ ಬದಲು ಸೋಯಾ ಹಾಲು ಕುಡಿಯುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.  ಬೆಳ್ಳುಳ್ಳಿಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಬೇಡದ ಕೊಬ್ಬಿನಂಶವನ್ನು ಬೇಗನೆ ಕರಗಿಸುತ್ತದೆ. ದಿನಾ ಬೆಳಗ್ಗೆ ಒಂದು ಎಸಳು ಬೆಳ್ಳುಳ್ಳಿ ತಿನ್ನಿ, ಒಳ್ಳೆಯದು.  ಬೆಂಡೆಕಾಯಿಮಧುಮೇಹಿಗಳು ಮತ್ತು ಕೊಲೆಸ್ಟ್ರಾಲ್ ಇರುವವರು ಬೆಂಡೆಕಾಯಿಯನ್ನು ತಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಕಾಯಿಲೆ ಹೆಚ್ಚಾಗದಂತೆ ತಡೆಯಬಹುದು.  ರೆಡ್ ವೈನ್ರೆಡ್ ವೈನ್ ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಯುತ್ತದೆ ಎಮದು ಸಂಶೋಧನೆಯಿಂದ ತಿಳಿದುಬಂದಿದೆ.  ಚಾಕಲೇಟ್ ಡಾರ್ಕ್ ಚಾಕಲೇಟ್ ಕೂಡ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.  ಬೀನ್ಸ್ಬೀನ್ಸ್ ನಲ್ಲಿ ನಾರಿನಂಶ ಅಧಿಕವಿರುವುದರಿಂದ ಇದನ್ನು ಬೇಯಿಸಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ಕಡಿಮೆ ಮಾಡಬಹುದು.   ಕರಿ ಮೆಣಸುಕರಿ ಮೆಣಸು ಕೂಡ ಬೆಳ್ಳುಳ್ಳಿಯಷ್ಟೇ ಪ್ರಯೋಜನಕಾರಿ. ಮಾರ್ಗ್ರೈನ್ ಮಾರ್ಗ್ರೈನ್ ಕ್ಯಾಲೋರಿ ಕಡಿಮೆ ಇದ್ದು ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತ ಪರಿಚಲನೆ ಸರಿಯಾಗಿ ನಡೆಯಲು ಇದನ್ನು ತಿನ್ನುವುದು ಒಳ್ಳೆಯದು.

ಈ ಹಣ್ಣುಗಳನ್ನು ತಿಂದರೆ ಆರೋಗ್ಯ ಭಾಗ್ಯ ಹೆಚ್ಚುತ್ತದೆ

ಈ ಹಣ್ಣುಗಳನ್ನು ತಿಂದರೆ ಆರೋಗ್ಯ ಭಾಗ್ಯ ಹೆಚ್ಚುತ್ತದೆ

ಆಯಾ ಸೀಸನ್‌ನಲ್ಲಿ ಹೆಚ್ಚು ಲಭ್ಯವಿರುವ ಹಣ್ಣುಗಳಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು… ಸೀಸನ್‌ಗೆ ತಕ್ಕಂತೆ ಮಾರುಕಟ್ಟೆಗೆ ಆಗಮಿಸುವ ಸತ್ವಭರಿತ ರುಚಿಯಾದ ಹಣ್ಣುಗಳು ಅಪಾರವಾದ ಜೀವಸತ್ವಗಳನ್ನು, ಪ್ರೋಟೀನ್‌, ಖನಿಜಾಂಶಗಳನ್ನು ಹೊಂದಿರುತ್ತವೆ. ದೇಹದ ಪೋಷಣೆ, ಬೆಳವಣಿಗೆ, ತ್ವಚೆಯ ಆರೋಗ್ಯ, ರೋಗನಿರೋಧಕ ಶಕ್ತಿ, ವೃದ್ಧಿ ಇತ್ಯಾದಿಗಳಿಗಾಗಿ ಹಣ್ಣನ್ನು ಸೇವಿಸುವುದು ಉತ್ತಮ. ಕೆಲವು ಸೀಸನ್‌ ಹಣ್ಣುಗಳ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ. ಕಿವಿ ಫ್ರೂಟ್‌ ಕಿವಿ ಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಇ ಹೆಚ್ಚಾಗಿರುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ. ಕ್ಯಾನ್ಸರ್‌ ಸಂಬಂಧಿಧಿ ತೊಂದರೆಗಳ ನಿವಾರಕ. ಕಡಿಮೆ ಕ್ಯಾಲೋರಿ ಹೊಂದಿದ್ದು ಹೆಚ್ಚು ಫೈಬರ್‌ಯುಕ್ತವಾಗಿದೆ. ಇದು ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯಕ. ಈ ಹಣ್ಣುಗಳನ್ನು ರೆಫ್ರಿಜಿರೇಟರ್‌ನಲ್ಲಿ 4 ವಾರಗಳವರೆಗೂ ಸಂಗ್ರಹಿಸಿಡಬಹುದು. ಎಲ್ಲರ ಪ್ರೀತಿ ಪಾತ್ರ ಸೇಬು 100 ಗ್ರಾಂ ಸೇಬಿನ ಹಣ್ಣಿನಲ್ಲಿ 13.81 ಗ್ರಾಂನಷ್ಟು ಕಾರ್ಬೊಹೈಡ್ರೇಟ್ಸ್‌ ಹಾಗೂ 10.39 ಗ್ರಾಂನಷ್ಟು ಸಕ್ಕರೆ ಅಂಶ, 3.3 ಮಿಲಿಗ್ರಾಂನಷ್ಟು ಫೊ್ಲೕರೈಡ್‌, ಹಾಗು 85 % ನೀರಿನ ಅಂಶವಿರುತ್ತದೆ. ಆರೋಗ್ಯ ಪೂರ್ಣ ದೇಹದ ಬೆಳವಣಿಗೆಗೆ ಇದು ಉತ್ತಮವಾಗಿದ್ದು, ದಿನಕ್ಕೊಂದು ಸೇಬಿನ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂಬ ಗಾದೆ ಮಾತಿದೆ. ದ್ರಾಕ್ಷಿ ಹಣ್ಣು ದ್ರಾಕ್ಷಿ ಹಣ್ಣು ಹೆಚ್ಚು ನೀರಿನಾಂಶ ಹಾಗು ಸಕ್ಕರೆ ಅಂಶವನ್ನು ಹೊಂದಿದ್ದು, ಬೆಳೆಯುವ ಮಕ್ಕಳಿಗೆ ಉತ್ತಮ. ವಿಟಮಿನ್‌ ಬಿ1, ಬಿ2 ಮತ್ತು ಕೆ ಯಥೇಚ್ಛವಾಗಿದ್ದು ಶೇಕಡಾ 2 ರಷ್ಟು ಮಾತ್ರ ಕೊಬ್ಬಿನಾಂಶವನ್ನು ಹೊಂದಿದೆ. ಇದು ದೇಹಕ್ಕೆ ಅಗತ್ಯವಾದ ಖನಿಜಾಂಶವನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ನೀರಿನಾಂಶವನ್ನು ಕಾಪಾಡಲು ಸಹಕಾರಿ. ಪರಂಗಿ ಹಣ್ಣು ಪರಂಗಿ ಹಣ್ಣು ಉತ್ತಮ ವಿಟಮಿನ್‌ ಸಿ, ಇ, ಮತ್ತು ಡಿ ಹೊಂದಿದ್ದು , ಕಣ್ಣು ಹಾಗು ತ್ವಚೆಯ ಆರೋಗ್ಯಕ್ಕೆ ಉತ್ತಮವಾದದ್ದು. ಕೊಲೆಸ್ಟ್ರಾಲ್‌ ಕಡಿಮೆಗೊಳಿಸುತ್ತದೆ. ದಿನ ನಿತ್ಯದ ಡಯಟ್‌ಗೆ ಈ ಹಣ್ಣಿನ ಸಲಾಡ್‌ ಉತ್ತಮವಾದದ್ದು. … Read more

ಕಲ್ಲಂಗಡಿ ಹಣ್ಣಿನ ಬೀಜ ಈ ಹೃದಯ ಸಂಬಂಧಿ ಸಮಸ್ಯೆಗಳ್ಳನ್ನು ನಿವಾರಿಸುತ್ತದೆ.

ಕಲ್ಲಂಗಡಿ ಹಣ್ಣಿನ ಬೀಜ ಈ ಹೃದಯ ಸಂಬಂಧಿ ಸಮಸ್ಯೆಗಳ್ಳನ್ನು ನಿವಾರಿಸುತ್ತದೆ.

ಬೇಸಿಗೆ ಕಾಲ ಬಂತು ಬಿಸಿಲಲ್ಲಿ ತಂಪಾಗಿರುವು ಜ್ಯುಸ್ ಅಥವಾ ಹಣ್ಣನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತಾರೆ. ಅಂತಹ ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ ಬಾಯಾರಿಕೆ ನೀಗಿಸುವ ಅತ್ಯುತ್ತಮ ಹಣ್ಣು ಎಂದರೆ ಅದು ಕಲ್ಲಂಗಡಿ, ನಮಗೆ ದಣಿವಾದಾಗ ಒಂದು ತುಂಡು ಕಲ್ಲಂಗಡಿ ಹಣ್ಣು ತಿಂದರೆ ಸಾಕು ತೃಪ್ತಿ ಸಿಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ಬೀಜದಲ್ಲಿ ಅನೇಕ ಆರೋಗ್ಯಕಾರಿ ಉಪಯೋಗಗಳಿಗೆ ಇಂದು ಅದರ ಬಗ್ಗೆ ತಿಳಿಯೋಣ. ಕಲ್ಲಂಗಡಿ ಹಣ್ಣುಗಳು ಹಳದಿ ಹಾಗೂ ಕಿತ್ತಲೆ ಬಣ್ಣದಲ್ಲಿ ವಿಶ್ವದ ಎಲ್ಲಾ ಕಡೆಯಲ್ಲೂ ಲಭ್ಯವಿದೆ, ನಿಮಗೆ ಆಶ್ಚರ್ಯವಾಗಬಹುದು ಬಿಳಿಯ ಸಿಪ್ಪೆ ಯನ್ನು ಹೊಂದಿರುವ ಕಲ್ಲಂಗಡಿ ಯು ಸಹ ಇದೆ, ಚೀನಾದ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಇತರ ಬೀಜಗಳೊಂದಿಗೆ ಸೇರಿಸಿ ಸೇವನೆ ಮಾಡುತ್ತಾರೆ, ಅಷ್ಟೇ ಅಲ್ಲದೆ ವಿಯಟ್ನಾಮ್ ಹೊಸ ವರ್ಷದ ರಜೆ ಸಂದರ್ಭದಲ್ಲೂ ಈ ಹಣ್ಣಿನ ಬೀಜಗಳನ್ನು ತಿನ್ನುತ್ತಾರೆ. ಕಾರಣ ಈ ಹಣ್ಣಿನ ಬೀಜದಲ್ಲಿ ವಿಟಮಿನ್ ಎ, ಬಿ1, ಬಿ6, ವಿಟಮಿನ್ ಸಿ, ಪೊಟಾಶಿಯಂ ಹಾಗೂ ಮೆಗ್ನೇಶಿಯಂ ಗಳ ಸಾರವೇ ಇದೆ, ಭಾರತದಲ್ಲಿ ಹಣ್ಣುಗಳನ್ನು ತಿಂದು ಬೀಜವನ್ನು ಬಿಸಾಕುತ್ತಾರೆ ಆದರೆ ಚೀನಾ ಅಥವಾ ವಿಯಟ್ನಾಮ್ ದೇಶದಲ್ಲಿ ಬೀಜಗಳನ್ನು ಯಾವುದೇ ಕಾರಣಕ್ಕೂ ಬಿಸಾಡುವುದಿಲ್ಲ. ಕಲ್ಲಂಗಡಿ ಹಣ್ಣಿನ ಬೀಜದ ಸೇವನೆಯಿಂದ ದೊರೆಯುವ ಉಪಯೋಗಗಳು: ಈ ಹಣ್ಣಿನ ಬೀಜದಲ್ಲಿ ಮೆಗ್ನೇಶಿಯಂ ಅಂಶ ಹೆಚ್ಚಾಗಿರುವುದರಿಂದ ಹೃದಯವು ಸಹಜವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯವನ್ನು ನಿಧಾನಗೊಳಿಸುತ್ತದೆ. ಮೊಡವೆಗಳು ಹೆಚ್ಚಾದಲ್ಲಿ ಇದೇ ಬೀಜಗಳ ಎಣ್ಣೆಯಿಂದ ಮಸಾಜ್ ಮಾಡಿದರೆ ಸೂಕ್ಷ್ಮ ರಂಧ್ರಗಳಲ್ಲಿ ಇರುವ ಕಲೆಗಳನ್ನು ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸುವಲ್ಲಿ ಸಹಾಯಕ. ಎಣ್ಣೆಯಲ್ಲಿರುವ ಪ್ರೋಟಿನ್ ಹಾಗೂ ಅಮೈನೋ ಆಮ್ಲಗಳಿಂದ ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ. ಈ ಬೀಜಗಳನ್ನು ಹುರಿದು ಪುಡಿ ಮಾಡಿ ಕೂದಲಿಗೆ ಹಚ್ಚಿ ಕೊಳ್ಳುವುದರಿಂದ ಕೂದಲು ಕಾಂತಿಯುತವಾಗಿ ಬೆಳೆಯುತ್ತದೆ. ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಈ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು, ಊರಿ ಕೂತ ದಂತ ಶರೀರದ ಯಾವುದಾದರೂ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡರೆ ಮುಕ್ಕಾಲು ಕಪ್ ಬಿಸಿ ನೀರಿನಲ್ಲಿ ಒಂದು ಚಮಚ ಈ ಪುಡಿ 1 ಚಮಚ ಜೇನು ತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಕುಡಿದರೆ ನೋವು ಶಮನವಾಗುತ್ತದೆ.

ಸರಿಯಾಗಿ ತಿನ್ನವುದು ಹೇಗೆ – ೫ ಆರೋಗ್ಯಕರ ಸಲಹೆಗಳು – ಸದ್ಗುರು

ಸರಿಯಾಗಿ ತಿನ್ನವುದು ಹೇಗೆ - ೫ ಆರೋಗ್ಯಕರ ಸಲಹೆಗಳು - ಸದ್ಗುರು

“ನಾವು ಹೇಗೆ ತಿನ್ನುತ್ತೀವಿ ಎಂಬುವುದು ನಾವು ಏನನ್ನು ತಿನ್ನುತ್ತೀವಿ ಅನ್ನುವುದರಷ್ಟೇ ಮುಖ್ಯ. ಸರಿಯಾಗಿ ತಿನ್ನುವುದು ಹೇಗೆ ಎಂದು ತೋರಿಸುವ ಈ ೫ ಸರಳವಾದ ಆಹಾರ ಸಲಹೆಗಳು, ನಾವು ತಿನ್ನುವ ಆಹಾರದಿಂದ ಉತ್ತಮವಾದದನ್ನು ಪಡೆಯುವುದಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.” #೧: ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಹೊಟ್ಟೆ ಖಾಲಿಯಾಗಿರುವಾಗ ಮಾನವನ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹೊಟ್ಟೆ ಹಸಿದಿದೆ ಎಂಬ ಸಂದೇಶವನ್ನು ಮೆದುಳಿಗೆ ಕೊಂಡೊಯ್ಯುವ ghrelin  ಎಂಬ ಹಾರ್ಮೋನನ್ನು ಖಾಲಿ ಹೊಟ್ಟೆಯು ಉತ್ಪಾದಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕುತೂಹಲಕಾರಿ ವಿಷಯವೇನೆಂದರೆ, ಈ ಹಾರ್ಮೋನು ಇತರೆ ಕೆಲಸವನ್ನು ಸಹ ಮಾಡುವಂತೆ ತೋರುತ್ತದೆ. Ghrelin, ಕಲಿಕೆ, ಜ್ಞಾಪಕ ಶಕ್ತಿ ಮತ್ತು ಪ್ರಾದೇಶಿಕ ವಿಶ್ಲೇಷಣೆಯನ್ನು ನಿಭಾಯಿಸುವ; ಹಾಗೂ ನಮ್ಮನ್ನು ಎಚ್ಚರ, ಸಕ್ರಿಯ ಮತ್ತು ಕೇಂದ್ರೀಕೃತರನ್ನಾಗಿಸುವ ಹಿಪ್ಪೋಕಾಂಪಸ್-ನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ನಾವು ಏನನ್ನೂ ತಿನ್ನಬಾರದು ಎಂದು ಇದರ ಅರ್ಥವಲ್ಲ, ಬದಲಾಗಿ, ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ನಾವು ಜಾಗರೂಕರಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಯೋಗಿ ಮತ್ತು ದಾರ್ಶನಿಕರಾದ, ಸದ್ಗುರುಗಳು ನಮ್ಮ ಆಹಾರ ಸೇವನೆಯನ್ನು ಸರಿಪಡಿಸಿಕೊಳ್ಳುವ ಮೂಲಕ ನಮ್ಮ ದಿನವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ವಿವರಿಸುತ್ತಾರೆ. “ನೀವು ದಿನಪೂರ್ತಿ ತಿನ್ನುತ್ತಾ ಇರಬಾರದು. ನೀವು ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ದಿನಕ್ಕೆ ಮೂರು ಬಾರಿ ಊಟ ಮಾಡುವುದು ನಿಮ್ಮ ಜೀವನಕ್ಕೆ ಸರಿಹೊಂದುತ್ತದೆ. ನಿಮ್ಮ ವಯಸ್ಸು ಮೂವತ್ತಕ್ಕಿಂತ ಹೆಚ್ಚಿದ್ದರೆ, ದಿನಕ್ಕೆ ಎರಡು ಬಾರಿ ಊಟ ಮಾಡುವುದು ಉತ್ತಮ. ಹೊಟ್ಟೆ ಖಾಲಿಯಾಗಿದ್ದಾಗ ಮಾತ್ರ ನಮ್ಮ ದೇಹ ಮತ್ತು ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಎರಡೂವರೆ ಗಂಟೆಗಳ ಒಳಗೆ ಆಹಾರವು ಹೊಟ್ಟೆಯ ಚೀಲದಿಂದ ಆಚೆ ಹೋಗುವ ರೀತಿಯಲ್ಲಿ, ಹಾಗೂ ಹನ್ನೆರಡರಿಂದ ಹದಿನೆಂಟು ಗಂಟೆಗಳೊಳಗೆ, ಇದು ಸಂಪೂರ್ಣವಾಗಿ ನಿಮ್ಮ ವ್ಯವಸ್ಥೆಯಿಂದ ಆಚೆ ಹೋಗುವ ರೀತಿಯಲ್ಲಿ, ಅರಿವಿನಿಂದ ತಿನ್ನಿರಿ. ನೀವು ಈ ಸರಳ ಅರಿವನ್ನು ಕಾಪಾಡಿಕೊಂಡರೆ, ಹೆಚ್ಚು ಶಕ್ತಿ, ಚುರುಕುತನ ಮತ್ತು ಎಚ್ಚರವನ್ನು ಅನುಭವಿಸುತ್ತೀರಿ.” – ಸದ್ಗುರು #೨: ಅಗಿಯಲು ಮರೆಯದಿರಿ! ಆರೋಗ್ಯವಾಗಿ ತಿನ್ನುವುದರ ಬಗ್ಗೆ ನಮ್ಮ ಎರಡನೆಯ ಸಲಹೆಯನ್ನು ನೀವು ಸಣ್ಣವರಿದ್ದಾಗ, ಪ್ರಾಯಶಃ ಸಾವಿರಾರು ಸಲ ನಿಮ್ಮ ಹೆತ್ತವರಿಂದ ನೀವು ಹೇಳಿಸಿಕೊಂಡಿರುವ ಸಂಗತಿ: ಆಹಾರವನ್ನು ಸರಿಯಾಗಿ ಅಗಿಯುವುದು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ಟಾರ್ಚ್ ಹೊಂದಿರುವ ಆಹಾರಕ್ಕೆ, ಜೀರ್ಣಕ್ರಿಯೆಯು ಶೇ. ೩೦%ನಷ್ಟು ಎಂಜಲಿನ ಮೂಲಕ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಊಟದ ನಂತರ, ಮಲಗುವ ಮೊದಲು, ಕನಿಷ್ಟ ಎರಡು ಗಂಟೆಗಳ ವಿರಾಮವನ್ನು ನೀಡಿ. ಜೀರ್ಣಕ್ರಿಯೆಯು ನಿಮ್ಮ ಚಯಾಪಚಯ (metabolic) ಚಟುವಟಿಕೆಯನ್ನು ಹೆಚ್ಚಿಸುತ್ತದೆ. ನೀವು ಅಂತಹ ಸ್ಥಿತಿಯಲ್ಲಿ ಮಲಗಿದರೆ, ನೀವು ಚೆನ್ನಾಗಿ ನಿದ್ದೆಯನ್ನೂ ಮಾಡುವುದಿಲ್ಲ ಹಾಗೂ ತಿಂದಿದ್ದನ್ನು ಸರಿಯಾಗಿ ಜೀರ್ಣಿಸಿಕೊಳ್ಳುವುದಿಲ್ಲ ಸಹ! ನೀವು ಏನನ್ನು ತಿಂದಿರೋ, ಅದನ್ನು ಅವಲಂಬಿಸಿ, ತಿಂದ ತಕ್ಷಣ ಮಲಗಿದರೆ, ಆಹಾರದ ಹೆಚ್ಚಿನ ಭಾಗವು ಜೀರ್ಣವಾಗದೆ ಉಳಿಯಬಹುದು.  ಆಹಾರವನ್ನು ಅಗಿಯುವ ಬಗ್ಗೆ ಯೋಗ ವಿಜ್ಞಾನದ ದೃಷ್ಟಿಕೋನವನ್ನು ಕೂಡ ಸದ್ಗುರುಗಳು ನೀಡುತ್ತಾರೆ.  … Read more

error: Content is protected !!